Write a letter to your leaders

Get Started
ಮಣ್ಣುಬೆಂಬಲಿಗರುಇದರ ಕುರಿತು
ಈಗಲೇ ಕಣಕ್ಕೆ
Background

ಕಾನ್ಷಿಯಸ್ ಪ್ಲಾನೆಟ್-ಪ್ರಜ್ಞಾವಂತ ಪ್ರಪಂಚ

ಕಾನ್ಷಿಯಸ್ ಪ್ಲಾನೆಟ್ ಅಥವ ಪ್ರಜ್ಞಾವಂತ ಪ್ರಪಂಚ ಅಭಿಯಾನವು ಮಾನವ ಪ್ರಜ್ಞೆಯನ್ನು ಹೆಚ್ಚಿಸಿ, ನಮ್ಮ ಸಮಾಜದ ಬಹುವಿಧದ ಚಟುವಟಿಕೆಗಳು ಪ್ರಜ್ಞಾಪೂರ್ವಕ ಕ್ರಮದಲ್ಲಿ ನಡೆಯುವಂತಹ ಒಂದು ಒಳಗೊಳ್ಳುವಿಕೆಯ ಭಾವವನ್ನು ತರುವ ಪ್ರಯತ್ನವಾಗಿದೆ. ಇದು ಪರಿಸರ ಮತ್ತು ಭೂಮಿಯ ಎಲ್ಲಾ ಜೀವಿಗಳಿಗೆ ಬೆಂಬಲವಾಗಿರುವಂತಹ ಮಾನವ ಚಟುವಟಿಕೆಗಳನ್ನು ಹೊಂದಿಸುವ ಒಂದು ಪ್ರಯತ್ನವಾಗಿದೆ.

ಇನ್ನಷ್ಟು ಓದಿರಿ

ಮಣ್ಣು ಉಳಿಸಿ ಅಭಿಯಾನವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ:

1

ಮಣ್ಣಿನ ನಾಶದ ಕಡೆಗೆ ಪ್ರಪಂಚದ ಗಮನವನ್ನು ಸೆಳೆಯುವುದು.

2

Inspiring about 4 billion people (60% of the world’s electorate of 5.26 billion) to support policy redirections to safeguard, nurture and sustain soils.

3

ಮಣ್ಣಿನ ಸಾವಯವ ಅಂಶವನ್ನು ಕನಿಷ್ಠ 3 ರಿಂದ 6% ಗೆ ಏರಿಸಿ ಅದನ್ನು ಹಾಗೆಯೇ ಉಳಿಸಿಕೊಂಡು ಹೋಗುವೆಡೆಗೆ, ರಾಷ್ಟ್ರೀಯ ನೀತಿನಿಯಮಾವಳಿಗಳಲ್ಲಿ ಬದಲಾವಣೆಗಳನ್ನು ತರಲು 193 ರಾಷ್ಟ್ರಗಳನ್ನು ಪ್ರೇರೇಪಿಸುತ್ತದೆ.

Soil Revitalization

Global Policy Draft Recommendations & Sustainable Soil Management

View More
soil
background
Sadhguru

ಸದ್ಗುರು

ಯೋಗಿ, ದಾರ್ಶನಿಕ ಮತ್ತು ಮಾನವತಾವಾದಿಯಾದ ಸದ್ಗುರುಗಳು ನಮ್ಮ ಕಾಲದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರು. ಅಗಾಧ ಸಾಮರ್ಥ್ಯದ ಜ್ಞಾನೋದಯ ಹೊಂದಿದ ಗುರುಗಳಾದ ಅವರು, ಕೆಲವು ವೈವಿಧ್ಯಮಯ ಹಾಗೂ ವ್ಯಾಪಕವಾದ ಮಹತ್ತರ ಸವಾಲುಗಳನ್ನು ಕೈಗೊಂಡಿದ್ದಾರೆ.

ಆದಾಗ್ಯೂ, ಅವರ ಎಲ್ಲಾ ಪ್ರಯತ್ನಗಳು ಯಾವಾಗಲೂ ಒಂದೇ ಗುರಿಯತ್ತ ಮುಡಿಪಾಗಿವೆ - ಮಾನವ ಪ್ರಜ್ಞೆಯನ್ನು ಉನ್ನತಿಗೇರಿಸುವುದು. ಕಳೆದ ನಾಲ್ಕು ದಶಕಗಳಲ್ಲಿ, ಸದ್ಗುರುಗಳು ಈಶಾ ಫೌಂಡೇಶನ್ ಮೂಲಕ ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಯೋಗಕ್ಷೇಮದ ತಂತ್ರಜ್ಞಾನಗಳನ್ನು ಒದಗಿಸಿದ್ದಾರೆ. ಇದನ್ನು ಪ್ರಪಂಚದಾದ್ಯಂತ 300 ನಗರಗಳಲ್ಲಿ 1.6 ಕೋಟಿ ಸ್ವಯಂಸೇವಕರು ಬೆಂಬಲಿಸುತ್ತಿದ್ದಾರೆ. ರಾಷ್ಟ್ರಕ್ಕೆ ಸಲ್ಲಿಸಿದ ಸೇವೆಗಾಗಿ ಪದ್ಮವಿಭೂಷಣ ಮತ್ತು 2010 ರಲ್ಲಿ ಭಾರತದ ಅತ್ಯುನ್ನತ ಪರಿಸರ ಪ್ರಶಸ್ತಿಯಾದ ಇಂದಿರಾಗಾಂಧಿ ಪರ್ಯಾಯ ಪುರಸ್ಕಾರ್ ಸೇರಿದಂತೆ, ಸದ್ಗುರುಗಳಿಗೆ ಮೂರು ರಾಷ್ಟ್ರಪತಿ ಪ್ರಶಸ್ತಿಗಳನ್ನು ನೀಡಲಾಗಿದೆ.

ಇನ್ನಷ್ಟು ಓದಿರಿ

ಮಣ್ಣು ಉಳಿಸಿ: 24 ವರ್ಷಗಳ ಹಿಂದೆ ಆರಂಭವಾದ ಅಭಿಯಾನ

ಮೂರು ದಶಕಗಳಿಂದ ಸದ್ಗುರುಗಳು ನಿರಂತರವಾಗಿ ಮಣ್ಣಿನ ಮಹತ್ವವನ್ನು ಮತ್ತು ಮಣ್ಣಿನ ಅಳಿವಿನ ಆತಂಕಕಾರಿ ವಿಪತ್ತನ್ನು ಗಮನಕ್ಕೆ ತರುತ್ತಿದ್ದಾರೆ. ಅವರು ಹಲವಾರು ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಪದೇ ಪದೇ ಪ್ರತಿಪಾದಿಸುವುದು ಏನೆಂದರೆ: "ಮಣ್ಣು ನಮ್ಮ ಜೀವನ, ನಮ್ಮ ದೇಹ. ನಾವು ಮಣ್ಣನ್ನು ತ್ಯಜಿಸಿದರೆ, ಅನೇಕ ರೀತಿಯಲ್ಲಿ, ಭೂಮಿಯನ್ನು ತ್ಯಜಿಸಿದಂತೆ."

Save Soil Banner

ಮಣ್ಣನ್ನು ಉಳಿಸುವವರು ಯಾರು?

Tree

1990 ರ ದಶಕ. ತಮಿಳುನಾಡಿನ ಗ್ರಾಮೀಣ ಪ್ರದೇಶ. ಜನರ ಗುಂಪೊಂದು ಹೇರಳವಾದ ಎಲೆಗಳ ಮರದ ನೆರಳಿನಲ್ಲಿ ಕಣ್ಣು ಮುಚ್ಚಿ ಕುಳಿತಿತ್ತು. ಸ್ವಲ್ಪ ಸಮಯದ ಹಿಂದೆ, ಅವರು ದಕ್ಷಿಣ ಭಾರತದ ಸೂರ್ಯನ ಘೋರ ಪರಿಣಾಮಗಳನ್ನು ಅನುಭವಿಸುತ್ತಾ, ಬಿಸಿಲಿಗೆ ಬಾಡುತ್ತಾ ಮತ್ತು ಬೆವರುತ್ತಾ, ತೆರೆದ ಸ್ಥಳದಲ್ಲಿ ಕುಳಿತುಕೊಂಡಿದ್ದರು. ಈಗ, ರಕ್ಷಣೆ ನೀಡುವ ಹಸಿರ ನೆರಳಿನಲ್ಲಿ, ತಂಪಾದ ಗಾಳಿ ಬೀಸುತ್ತಿರುವಾಗ ಅವರು ದೊಡ್ಡ ಮರದ ಸತ್ವ ಮತ್ತು ಅನುಗ್ರಹವನ್ನು ಅರಿತುಕೊಂಡರು.

ಸದ್ಗುರುಗಳು ಅವರನ್ನು ಒಂದು ಆಂತರಿಕ ಪ್ರಕ್ರಿಯೆಯ ಮೂಲಕ ಮುನ್ನಡೆಸಿದರು, ಅಲ್ಲಿ ಅವರು ಮರದೊಂದಿಗೆ ಉಸಿರಾಟದ ವಿನಿಮಯವನ್ನು ಅನುಭವಿಸಿದರು, ಅವರು ಹೊರಬಿಟ್ಟ ಇಂಗಾಲವನ್ನು ಮರಗಳು ಎಳೆದುಕೊಂಡವು, ಮತ್ತು ಮರಗಳು ಹೊರಬಿಟ್ಟ ಆಮ್ಲಜನಕವನ್ನು ಅವರು ಎಳೆದುಕೊಂಡರು. ಅವರ ಉಸಿರಾಟದ ಉಪಕರಣದ ಅರ್ಧದಷ್ಟು ಭಾಗ ಅಲ್ಲಿ ನೇತಾಡುತ್ತಿರುವುದನ್ನು ಅವರು ಸ್ಪಷ್ಟವಾಗಿ ನೋಡುವ ಅನುಭವದ ಪ್ರಕ್ರಿಯೆ. ಸದ್ಗುರುಗಳು "ಅತ್ಯಂತ ಕಷ್ಟಕರವಾದ ಜಾಗ ಎಂದು ಕರೆಯುವ - ಜನರ ಮನಸ್ಸಿನಲ್ಲಿ - ಮರಗಳನ್ನು ನೆಡಲು ಪ್ರಾರಂಭಿಸಿದ ಆರಂಭಿಕ ದಿನಗಳು". ಎಲ್ಲ ಜೀವಿಗಳೊಂದಿಗಿನ ಏಕತೆಯ ಈ ಮೊದಲ ಅನುಭವ ನಮ್ಮ ಭೂಮಿಯನ್ನು ಪುನಃಚ್ಚೇತನಗೊಳಿಸಲು ಈ ಅಭಿಯಾನ ಮೊದಲು ಪ್ರಾರಂಭಿಸಿದ ಉತ್ಸಾಹಿ ಸ್ವಯಂಸೇವಕರನ್ನು ಉತ್ತೇಜಿಸಿತು.

What began with a few thousand volunteers in the 1990s in the form of Vanashree, an eco-drive aimed at greening the Velliangiri Hills, soon grew into Project GreenHands, a large state-wide campaign with millions of volunteers across Tamil Nadu in the first decade of 2000s. In 2017, when Sadhguru led the incredible Rally for Rivers, it snowballed into the largest environmental movement on the planet supported by 162 million Indians, further leading to intense on-ground activity with the extremely hands-on, proof-of-concept project Cauvery Calling. Now, it will include billions of global citizens in an unprecedented movement to create a Conscious Planet and Save Soil. Sadhguru’s mission to reach 4 billion people on Earth has been the product of three decades of work and evolution.

ಈ ಅಭಿಯಾನದಿಂದ ಸ್ಫೂರ್ತಿ ಪಡೆದ ಅಪಾರ ಜನರ ಸಂಖ್ಯೆಯು ಈ ಅಭಿಯಾನದ ವಿಕಸನದಲ್ಲಿನ ನಿರ್ಣಾಯಕ ಅಂಶವಾಗಿದೆ. ಇದಲ್ಲದೆ, ಅದರ ಬೆಳೆಯುತ್ತಿರುವ ಪ್ರಭಾವದ ಮಟ್ಟವು ಅಷ್ಟೇ ಮುಖ್ಯವಾಗಿದೆ. ಸ್ಥಳೀಯ ಸಮುದಾಯಗಳು, ಸಂಸ್ಥೆಗಳು, ರೈತರು, ಶಾಲೆಗಳು ಮತ್ತು ರಾಜ್ಯ ಸರ್ಕಾರಗಳಿಂದ ಹಿಡಿದು, ಭಾರತದಲ್ಲಿ ರಾಷ್ಟ್ರೀಯ ನದಿ ನೀತಿಯನ್ನು ರೂಪಿಸಲು ಸಹಾಯ ಮಾಡುವವರೆಗೆ ಮತ್ತು ಈಗ ಪರಿಸರಕ್ಕೆ ಸಂಬಂಧಿಸಿದ ಕೆಲವು ಅಂತರರಾಷ್ಟ್ರೀಯ ಏಜೆನ್ಸಿಗಳು, ವಿಶ್ವ ನಾಯಕರು ಮತ್ತು ಸರ್ಕಾರಗಳೊಂದಿಗೆ ಕೆಲಸ ಮಾಡುವವರೆಗೆ - ಆಂದೋಲನವು ಕಳೆದ ಮೂರು ದಶಕಗಳಲ್ಲಿ ಹಠಾತ್ ಪ್ರಗತಿಯನ್ನು ಮಾಡುತ್ತಿದೆ.

ಮಣ್ಣು ಉಳಿಸಿ ಅಭಿಯಾನದ ಪ್ರಮುಖ ಪ್ರಯತ್ನವೆಂದರೆ ಇಡೀ ಪ್ರಜಾಪ್ರಭುತ್ವ ಪ್ರಪಂಚದ ನಾಗರಿಕರನ್ನು ಒಂದೇ ಧ್ವನಿಯಲ್ಲಿ ಭೂಮಿಯ ಆರೋಗ್ಯ ಮತ್ತು ಭವಿಷ್ಯದ ಬಗ್ಗೆ ಮಾತನಾಡಲು ಮತ್ತು ಅದನ್ನು ಕಾಪಾಡುವ ಬಗ್ಗೆ ತಮ್ಮ ಬದ್ಧತೆಯನ್ನು ದೃಢೀಕರಿಸಲು ಒಟ್ಟುಗೂಡಿಸುವುದು. ಪರಿಸರದ ಸಮಸ್ಯೆಗಳು ಚುನಾವಣಾ ವಿಷಯಗಳಾದಾಗ, ಮಣ್ಣಿನ ಸಂರಕ್ಷಣೆಗಾಗಿ ದೀರ್ಘಕಾಲೀನ ನೀತಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಜನರ ಬೆಂಬಲವು ಸರ್ಕಾರಗಳಿಗೆ ಸಿಕ್ಕಾಗ, ವ್ಯಾಪಾರಗಳು, ಸಂಸ್ಥೆಗಳು, ವ್ಯಕ್ತಿಗಳು ಮತ್ತು ಸರ್ಕಾರಗಳು ಮಣ್ಣಿನ ಆರೋಗ್ಯವನ್ನು ಪ್ರಾಥಮಿಕ ಆದ್ಯತೆಯಾಗಿ ಮಾಡಿದಾಗ - ಈ ನಿರಂತರ ಪ್ರಯತ್ನವು ಫಲ ನೀಡುತ್ತದೆ.

ಇದು ಗ್ರೀನ್ ಹೆಡ್ಸ್ ನಿಂದ ಶುರುವಾಗಿ, ಗ್ರೀನ್ ಹ್ಯಾಂಡ್ಸ್ ನಿಂದ ಮುಂದುವರೆದು, ಗ್ರೀನ್ ಹಾರ್ಟ್ಸ್ ವರೆಗಿನ ಪ್ರಯಾಣವಾಗಿದೆ. ಹಾಗಾದರೆ ಮಣ್ಣು ಉಳಿಸುವವರು ಯಾರು? ನಮ್ಮಲ್ಲಿನ ಪ್ರತಿಯೊಬ್ಬರೂ.

ಇದನ್ನು ಸಾಧ್ಯವಾಗಿಸೋಣ!

Hands-with-mud

ಬನ್ನಿ, ಇದನ್ನು ಸಾಧ್ಯವಾಗಿಸೋಣ!

ಈಗಲೇ ಕಣಕ್ಕೆ
footerLogo

ಮಣ್ಣು

© 2023 Conscious Planet All Rights Reserved

ಗೌಪ್ಯತಾ ನೀತಿ.

ನಿಯಮಗಳು ಮತ್ತು ಷರತ್ತುಗಳು.